Tuesday, November 15, 2016

ಭಗ್ನ ಪ್ರೇಮಿ

ಮರಳು ಮಾಡಿದಳು ನನ್ನ ಮನದನ್ನೆ ಮನೋರಮೆ
ತಿರುಗಿ ನೋಡದೆ ತಿಲಾಂಜಲಿಯಿಟ್ಟು ಹೋದಳೀ ತಿಲೋತ್ತಮೆ ।
ಮಂಕು ಮಾಡಿ ಮರೆಯಾದವಳು ಮತ್ತೆ ಬರುವಳೆಂದು 
ಸಂಭ್ರಮಿಸುವುದೇ ನನ್ನ ಭ್ರಮೆ ।।

ಗೆಳತಿ ,ಆಸೆ ಬೆಂಬತ್ತಿದ ನಿನಗೆ ,ಸಿಗಬಹುದು ಬಹಳ ಆಸ್ತಿ ।
ತಿಳಿದಿರಲಿ ಸಿಗುವುದಿಲ್ಲ ನಿನಗೆ ,ನನಗಿಂತಲೂ ಪ್ರೀತಿ ಮಾಡುವವ ತುಂಬಾ ಜಾಸ್ತಿ ।।

ಮೊಳಗಿದೆ ಒಳಗಿಂದ ಸುಮಧುರ ಹೃದಯವಾಣಿ ।
ಹೋಗಬೇಕು ನಿಲುಕದಷ್ಟು ದೂರ ,ನೀ ಬಳಸಿದರೂ ದೂರವಾಣಿ ।।

ಕೇಳಲಿಲ್ಲ ನಿನ್ನ, ಏಕೆ ದೂರದೇ ಎಂಬ ಪ್ರಶ್ನೆಗೆ ಉತ್ತರ ।
ತಿಳಿದಿದೆ ಕಾರಣವೂ ನನಗೆ, ನೀ ದಕ್ಷಿಣ ನಾ ಉತ್ತರ ।।

ಚೆಲುವೇ , ಕಿವಿ ಆಲಿಸಿ ಕೇಳು ನನ್ನ ಕಡೆ ಮಾತೊಂದ ।
ನಿನ್ನ ವಿದಾಯ ,ನನ್ನ ಹೊಸ ಸುಖ ಜೀವನದ ನವ ಅಧ್ಯಾಯ ।।

                                                              ---ಗೋ ನಾ ರಾಮಕೃಷ್ಣ ಭಟ್ 

No comments:

Post a Comment