Monday, December 22, 2014

ಪ್ರಕೃತಿ

ಕಗ್ಗತ್ತಲಲಿ ಕಾಣದಿರುವೆ ನೀನೆಲ್ಲಿರುವೆ ರವಿ
ಸುತ್ತಲ್ಲೆಲ್ಲು ಸುಳಿಯದಿರುವೆ ನಾನಿಲ್ಲುರುವೆ ಭುವಿ !
ನಿನ್ನ ನಾ ಗ್ರಹಿಸದಿರೆ ಆಗುವುದೇ ಗ್ರಹಣ
ನಿನ್ನ ನಾ ಮರೆತರೆ ಬಂದಪ್ಪುವುದೇ ಮರಣ !

ನೀನಿದ್ದರೂ ಕೆಂಪಾಗಿ ,ನಾನಿರುವೆ ತಂಪಾಗಿ ಮುನ್ನ
ಹುಡುಕುತಿರುವೆ ದಾರಿ ಕಾಣದೆ ನಿನ್ನ !
ಕಳಿಸಿಹೆನು ಸಾಗರವ ತಿಳಿಯಲು ಮಾಹಿತಿಯ ,
ಮರಳಿವೆ ಅಲೆಗಳು ಸಿಗದೇ ಸೇತುವೆಯ !

ಅನಿಸಿಹಿದು ಮನದಲ್ಲಿ ಇಂದು ,ವಿರಳವಲ್ಲ
ಬಹಳ ಸರಳವಿದು  ಎಂದು !
ಚಂದಿರನು ನಿಂದಿಹನು ಆಗಸದಿ ಮುಂಜಾನೆಯ ತನಕ
ಹಿಂದಿರುಗಿಸಲೆಂದೇ ಏನೋ ಸೂರ್ಯನ ಸಾಲದ ಬಡ್ಡಿ ಬೆಳಕ !

                                                                           ---ಗೋ ನಾ ರಾಮಕೃಷ್ಣ ಭಟ್