Monday, October 10, 2011

ಅನಿಸಿಕೆ

ನನ್ನಯ ಮನಸ್ಸಿನ ಅನಿಸಿಕೆ|
ಸವಿ ಸಂತೋಷ ನನಗೀಗ ಮರೀಚಿಕೆ||

ಮಾಸಿದೆ ಜೀವ ,ತಡಿಯದೇ ನೋವ|
ಹುದುಗಿಹ ಕನಸನು, ಮಾಡಿಹೆ  ನಿರ್ಜೀವ||
ನೋ ವೀನ  ದಂತಕಥೆ ,ನನ್ನ ವ್ಯಥೆ|
ಅದರಲ್ಲಿ ಏನಿಹುದು ಅಂತ ಸಾರ್ಥಕತೆ ||ನನ್ನಯ||

ಕಳೆದೋದ ಕಾಲ ಮತ್ತೆ ಬಂದರೆ,
ನನ್ನ ಹಳೆ ಆಸೆಗಳ  ರಾಶಿ ತಂದರೆ
ಯೋಚಿಸಿ ಗೆಲ್ಲವ ಆಸೆ,
ಅದುವೇ  ನನ್ನ  ಕೊನೆಯ ಆಸೆ || ನನ್ನಯ||
                                                                                --ಗೋ ನಾ ರಾಮಕೃಷ್ಣ ಭಟ್ 

No comments:

Post a Comment